Wednesday, October 24, 2018

ಯಕ್ಷಪ್ರಸಂಗಕೋಶ ಯೋಜನೆ – ಏಳನೇ ಮೈಲಿಗಲ್ಲಿನಲ್ಲಿ ೧೨ ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!


ಅಕ್ಟೋಬರ್ ೨೪, ೨೦೧೮

ಯಕ್ಷಪ್ರಸಂಗಕೋಶ ಯೋಜನೆಯ ಏಳನೇ ಹಂತದಲ್ಲಿ ೧೨ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೧೧೩ ಪ್ರಸ೦ಗಗಳು ಲೋಕಾರ್ಪಣೆಯಾಗಿವೆ.



ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!



·       ಈ ಬಾರಿ ಪ್ರಕಟವಾದ ೧೨ ಪ್ರಸ೦ಗಗಳ ಪಟ್ಟಿ:
1. ಸೌಗಂಧಿಕಾಹರಣ ಮತ್ತು ಜಟಾಸುರ ವಧೆ - ಧ್ವಜಪುರದ ನಾಗಪ್ಪಯ್ಯ
2. ಅನುಸಾಲ್ವ ಗರ್ವಭಂಗ ಮತ್ತು ನೀಲಧ್ವಜ ಕಾಳಗ - ಅಜ್ಜನಗದ್ದೆ ಶಂಕರನಾರಾಯಣ
3. ರತ್ನಾವತೀ ಕಲ್ಯಾಣ - ಮುದ್ದಣ ಯಾನೆ ನಂದಳಿಕೆ ಲಕ್ಷ್ಮೀನಾರಯಣಪ್ಪ
4. ಯೋಗಿನೀ ಕಲ್ಯಾಣ - ಅದ್ಯಪಾಡಿ ರಾಮಕೃಷ್ಣಯ್ಯ
5. ಲವಕುಶರ ಕಾಳಗ (ಪಠದ ಸಂಧಿ) - ಹಟ್ಟಿಯಂಗಡಿ ರಾಮಭಟ್ಟ
6. ಕೃಷ್ಣಾರ್ಜುನರ ಕಾಳಗ - ಹಳೆಮಕ್ಕಿ ರಾಮ
7. ಅತಿಕಾಯ ಕಾಳಗ - ಹಟ್ಟಿಯ೦ಗಡಿ ರಾಮಭಟ್ಟ
8. ಪುಲಿಕೇಶಿ ವಿಜಯ - ಎಂ. ಆರ್. ಲಕ್ಷ್ಮೀನಾರಾಯಣ
9. ವೀರ ಕೌಂಡ್ಲಿಕ - ಎಮ್. ಆರ್. ವಾಸುದೇವ ಸಾಮಗ
10. ಶ್ರೀಕೃಷ್ಣ ತುಲಾಭಾರ - ಬಲಿಪ ನಾರಾಯಣ ಭಾಗವತ (ಕಿರಿಯ)
11. ಕಲಾವತಿ ಕಲ್ಯಾಣ - ಭಾಗವತ ಮಾರ್ವಿ ಶ್ರೀನಿವಾಸ ಉಪ್ಪೂರ
12. ಜಲಂಧರನ ಕಾಳಗ - ಕುತ್ಯಾರು ಗೋಪಾಲಕೃಷ್ಣ ಉಪಾಧ್ಯಾಯ




ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ. 



ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)


No comments:

Post a Comment

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...