Friday, December 27, 2019

ಡಿಸೆಂಬರ್‌ ೨೭, ೨೦೧೯ರಂದು ಯಕ್ಷವಾಹಿನಿ ಸಹಯೋಗದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಲೋಕಾರ್ಪಣೆಗೊಂಡ ೪೪ ಡಿಜಿಟಲೀಕೃತ ಪ್ರಸಂಗಗಳು ಈಗ ಯಕ್ಷಪ್ರಸಂಗಕೋಶದಲ್ಲೂ ಲಭ್ಯ

ಕನ್ನಡ ಸಂಸ್ಕೃತ ಇಲಾಖೆಯ ಸನ್ಮಾನ ಸಚಿವ ಸಿ. ಟಿ. ರವಿ ಅವರು ೪೪ ಪ್ರಸಂಗಗಳ ಡಿಜಿಟಲೀಕರಣವನ್ನು ಲೋಕಾರ್ಪಣ ಮಾಡುವ ಮುನ್ನ ಸಹಯೋಗಿ ಸಂಸ್ಥೆಯ ಅಧ್ಯಕ್ಷ ಡಾ. ಆನಂದರಾಮ ಉಪಾಧ್ಯರು ಪ್ರಾಸ್ತಾವಿಕ ಭಾಷಣ ಮಾಡುತ್ತಿರುವುದು
(ಚಿತ್ರ ಕೃಪೆ - ಶ್ರೀ ಅವಿನಾಶ್‌ ಬೈಪಡಿತ್ತಾಯ)

ಮಾನ್ಯರೇ, ನಿನ್ನೆ ಡಿಸೆಂಬರ್‌ ೨೭ರಂದು ಯಕ್ಷವಾಹಿನಿ ಸಂಸ್ಥೆಯ ಸಹಯೋಗದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ೪೪ ಪ್ರಸಂಗಗಳ ಡಿಜಿಟಲೀಕರಣವು ಲೋಕಾರ್ಪಣಗೊಂಡಿತು. ಈ ೪೪ ಪ್ರಸಂಗಗಳು ಅಕಾಡೆಮಿಯ ವೆಬಸೈಟಿನಲ್ಲಿ ಮಾತ್ರ ಸಿಗುವುದಲ್ಲದೇ ನಮ್ಮ ಯಕ್ಷಪ್ರಸಂಗಕೋಶದಲ್ಲೂ ಸಿಗುತ್ತವೆ.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ವೆಬ್ಸೈಟಿನಲ್ಲಿ  ಪ್ರಸಂಗ ಡಿಜಿಟಲೀಕರಣದ ವಿಭಾಗಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ.‌

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಸಂಗಗಳ ಡಿಜಿಟಲೀಕರಣ ಯೋಜನೆಯ ವೆಬ್ಸೈಟಿನ ವಿಭಾಗದ ಕೊಂಡಿ

ಇದೇ ೪೪ ಪ್ರಸಂಗಗಳನ್ನು ನಮ್ಮ ಯಕ್ಷಪ್ರಸಂಗಕೋಶದಲ್ಲೂ ಸೇರಿಸಲಾಗಿದ್ದು, ಯಕ್ಷಪ್ರಸಂಗಕೋಶದಲ್ಲಿ ಅವುಗಳ ಕೊಂಡಿಗಳು ಈ ರೀತಿ ಇವೆ. ಈ ಪ್ರಸಂಗಗಳು ಯಕ್ಷಪ್ರಸಂಗಕೋಶದಲ್ಲಿ ಮೊದಲೇ ಪ್ರಕಟಿತವಾಗಿದ್ದು  ಈ ಆವೃತ್ತಿಗಳ ಮೂಲಕ ಇನ್ನಷ್ಟು  ಪರಿಷ್ಕೃತಗೊಂಡಿರುವ ಕಾರಣ ಆಸಕ್ತರು ಮತ್ತೊಮ್ಮೆ  ಈ ಕೊಂಡಿಗಳ ಮೂಲಕ ಕೆಳಗಿಳಿಸಿಕೊಳ್ಳಬಹುದು. ಅಕಾಡೆಮಿ ವೆಬ್ಸೈಟಿನಲ್ಲಿ ಸಿಗುವ ಈ ಪ್ರಸಂಗಗಳನ್ನು ಅದೇ ಆವೃತ್ತಿಯಲ್ಲಿ ಇಲ್ಲೂ ಸಿಗುವ ಹಾಗೆ ಮಾಡುವ ಮೂಲಕ, ಇವಗಳ ಸುತ್ತಲಿನ ಕೆಲಸಕ್ಕೆ ಅಕಾಡೆಮಿಯು ಕೊಟ್ಟ ಸಹಾಯಧನವನ್ನೇ ಪ್ರಾಯೋಜಕತ್ವವೆಂದು ಭಾವಿಸಿ ಅದನ್ನು ನಾವಿಲ್ಲಿ ಮನ್ನಿಸಿದ ಹಾಗೂ ಆಗಿದೆ, ಡಿಜಿಟಲೀಕೃತ ಈ ಪ್ರಸಂಗಗಳ ಉಚಿತ ಹಂಚಿಕೆಗೆ ನಾವು ಅಕಾಡೆಮಿಗೆ  ಮತ್ತಷ್ಟು ಸಹಕಾರದ ಭುಜ ಕೊಟ್ಟ ಹಾಗೂ ಆಗಿದೆ.
ಪ್ರಸ೦ಗ ಕವಿ ಪ್ರಸ೦ಗ ಪುಸ್ತಿಕೆ pdf ಕೊOಡಿ
ಆದಿನಾರಾಯಣ ದರ್ಶನ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCTk00SlNtTGFYZU0
ಕಬಂಧಮೋಕ್ಷ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCSFhsaWM1LUFMcm8
ಕಲಾವತಿ ಕಲ್ಯಾಣ ಭಾಗವತ ಮಾರ್ವಿ ಶ್ರೀನಿವಾಸ ಉಪ್ಪೂರ https://drive.google.com/open?id=15SQ7ppS7vc8g5bT7JFbpAkBadcoubbjf
ಕಿರಾತಾರ್ಜುನ ಪ್ರಸಂಗ ಗಿಂಡಿಮನೆ ಮೃತ್ಯುಂಜಯ https://drive.google.com/open?id=16p6p_aIt9hbXeqEvTJYN8Fu7xCxVaAgh
ಕುಮುದಾಕ್ಷಿ ಕಲ್ಯಾಣ ಚವರ್ಕಾಡು ಶಂಭು ಜೋಯಿಸರು https://drive.google.com/open?id=1_By-s2NUZMTM3_9720yDBfCoiB96K6Bj
ಕುವಲಯಾಶ್ವ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCRUZmakdHX25pWDA
ಖಾ೦ಡವ ದಹನ ಪ್ರೊ. ಎಂ. ಎ. ಹೆಗಡೆ  ಶಿರಸಿ https://drive.google.com/open?id=1LyvLsvcP2YE0aDiRvldhiSzLwj06OJ0D
ಗಯ ಯಜ್ಞ ಪ್ರೊ.  ಎಂ. ಎ. ಹೆಗಡೆ  ಶಿರಸಿ https://drive.google.com/open?id=1-kDd5H_NFuqKwemOGXOLi7SrMG6333R4
ಗರುಡ ಪ್ರತಾಪ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCN1JQUFlHVXM2UEk
ಗಿರಿಜಾ ಕಲ್ಯಾಣ ದೇವಿದಾಸ https://drive.google.com/open?id=0ByoSUfOf85mCcEhoVVRabS1ZS2M
ಗುರುದಕ್ಷಿಣೆ ಇಟಗಿ ಮಹಾಬಲೇಶ್ವರ ಭಟ್ಟ https://drive.google.com/open?id=0ByoSUfOf85mCT3V6NzhSSFhpeVU
ಜಡಭರತ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCYnYwOVZJajVHREE
ಜನಮೇಜಯ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCcVlLUERoRVpMV3c
ಜಲಂಧರನ ಕಾಳಗ ಕುತ್ಯಾರು ಗೋಪಾಲಕೃಷ್ಣ ಉಪಾಧ್ಯಾಯ https://drive.google.com/open?id=1ynpgMpEfJak2HOSRTz1M2Ldu-9YltQSE
ತ್ರಿಶಂಕು ಚರಿತ್ರೆ ಎಂ. ಎ. ಹೆಗಡೆ ಸಿದ್ದಾಪುರ https://drive.google.com/open?id=0ByoSUfOf85mCb0k4Mlk2U1djVkU
ದಕ್ಷ-ಚ೦ದ್ರ ಗಿ೦ಡೀಮನೆ ಮೃತ್ಯು೦ಜಯ https://drive.google.com/open?id=0ByoSUfOf85mCYmRXY1NDb1Z4bWM
ದೇವಯಾನಿ ಕಲ್ಯಾಣ ಹಲಸಿನಹಳ್ಳಿ ನರಸಿಂಹಶಾಸ್ತ್ರಿ https://drive.google.com/open?id=1UASxGs8TTT4-XIsNYhSC9-LPLYojrf5m
ದ್ರೌಪದೀ ಸ್ವಯಂವರ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCbzlNc1BnZ21QUEE
ನಹುಷ ಮೋಕ್ಷ ಶ್ರೀಧರ ಡಿ.ಎಸ್. https://drive.google.com/open?id=1bPNsIDyIJ8umqF9Hk07lnj5AH9wDk8Mt
ನಳ ಚರಿತ್ರೆ ಧ್ವಜಪುರದ ನಾಗಪ್ಪಯ್ಯ https://drive.google.com/open?id=0ByoSUfOf85mCRFNScTh1TFFlRVU
ನೈಮಿಷಾರಣ್ಯ ಶ್ರೀಧರ ಡಿ. ಎಸ್. https://drive.google.com/open?id=1EruAKy-uNtSLhmh2GbjbXuEwjExidgyt
ಪರೀಕ್ಷಿತ - ಅಸ್ತೀಕಜನ್ಮ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCS05OWFN5cmJXQ0k
ಪೃಥು ಯಜ್ಞ ಶ್ರೀಧರ ಡಿ. ಎಸ್. https://drive.google.com/open?id=1V9KqX-FwE38_V_yWjlDsnNwGmsFfcwey
ಬಕನ ಬಂಡಿ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCZ21rcHFaWndYMG8
ಬಾಲ ಭಾರತ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCX2pXT042Q2x1MVk
ಬ್ರಹ್ಮಕಪಾಲ ಕನ್ಯಾನ ವೆಂಕಟರಮಣ ಭಟ್ಟ https://drive.google.com/open?id=1bek7zYp8CZBK4eeZ4P1PcK-r4fl-88C-
ಭಕ್ತ ಮಾರ್ಕಂಡೇಯ ಅಡೂರು ಬಳಕಿಲ ವಿಷ್ಣಯ್ಯ https://drive.google.com/open?id=16SAy23CMgsJ3wiWWKY8LsX3q4PnwOeGN
ಭೀಷ್ಮಪರ್ವ ದೇವಿದಾಸ https://drive.google.com/open?id=1tdckMzBfPaNhH4TG4GgTS1sI334RvsF6
ಮರುತ್ ಜನ್ಮ ಪ್ರೊ.  ಎಂ. ಎ. ಹೆಗಡೆ  ಶಿರಸಿ https://drive.google.com/open?id=18T9Q_5N9qy1uyNvK5RWCqLWn5DKCrjih
ಮಹಾಪ್ರಸ್ಥಾನ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCTUVUUm1BWmtpZ2s
ಯಕ್ಷ ಪ್ರಶ್ನೆ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCczFINy1fVXJYUXM
ರಾಮಧಾನ್ಯ ಚರಿತ್ರೆ ಪ್ರೊ.  ಎಂ. ಎ. ಹೆಗಡೆ  ಶಿರಸಿ https://drive.google.com/open?id=1Rq7iiON89uGfYKzp0gXyifIoJ3moyxqg
ರುಕ್ಮವತೀ ಕಲ್ಯಾಣ ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ https://drive.google.com/open?id=0ByoSUfOf85mCaTlmeVVNUkVUdjA
ಶತಾಕ್ಷಿದುರ್ಗೆ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCcUpia0lNM1dlUDg
ಶರವೂರ ದುರ್ಗಾಂಬೆ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCcFp6N2d5UUtDWEk
ಶುಕ್ರ ಸಂಜೀವಿನೀ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCUy1IMjJiUTZmQzg
ಸಂಪೂರ್ಣ ರಾಮಾಯಣ ಬೆಳಸಲಿಗೆ ಗಣಪತಿ ಹೆಗಡೆ https://drive.google.com/open?id=1ihaVq8iAE0nCiM_e_NY6cAIsx8qgAZv4
ಸತ್ಯಂವದ ಧರ್ಮಂಚರ ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರ https://drive.google.com/open?id=1DRpIjORqWXghAZ2eFsMlcVlc2sLNJT3J
ಸಮಗ್ರ ಮಹಾಭಾರತ (ಕುರುಕ್ಷೇತ್ರ) ಬೆಳಸಲಿಗೆ ಗಣಪತಿ ಹೆಗಡೆ https://drive.google.com/open?id=1oFMRl2wWIsRc0uvvodkJv92ST-hXtuWJ
ಸೀತಾವಿಯೋಗ ಮತ್ತು ಲವಕುಶ ಪ್ರೊ. ಎಂ. ಎ. ಹೆಗಡೆ https://drive.google.com/open?id=1ZT25rXIsKv6woZ8saCrIkwgAxMy_pNoO
ಸುದ್ಯುಮ್ನ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCbEtpb0FzaFZyX0U
ಸೌಗಂಧಿಕಾಹರಣ ಮತ್ತು ಜಟಾಸುರ ವಧೆ  ಧ್ವಜಪುರದ ನಾಗಪ್ಪಯ್ಯ https://drive.google.com/open?id=1wf_zL_0KeBHbOoCN-0pSS_OJviSu08ts
ಸ್ವರ್ಣಕಮಲ ಶ್ರೀಧರ ಡಿ. ಎಸ್. https://drive.google.com/open?id=0ByoSUfOf85mCcEVuSnNqVlVmUWc
ಹರಿಶ್ಚಂದ್ರ ಚರಿತ್ರೆ ನಾರಾಯಣ ನಾಗಪ್ಪ ಜೋಷಿ https://drive.google.com/open?id=1_RcuWrfpMwn19zaLOQfUWQ6IIgjpAdcR


ಯಕ್ಷಪ್ರಸಂಗಕೋಶ ಯೋಜನೆಯಡಿ ಯಕ್ಷವಾಹಿನಿಯಿಂದ ಪ್ರಕಟಿಸಲ್ಪಟ್ಟ ಎಲ್ಲಾ ಪ್ರಸಂಗಗಳ ಇತ್ತೀಚಿನ ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ.
ಯಕ್ಷಪ್ರಸಂಗಕೋಶ ಯೋಜನೆಯಡಿ ಪ್ರಕಟಿತ ಎಲ್ಲಾ ಪ್ರಸಂಗಗಳು

ಅಕಾಡೆಮಿಯಿಂದ ಬಂದ ಸಹಾಯಧನದಲ್ಲಿ ಸಮಕಾಲೀನ ಕವಿಗಳಿಗೆ ಮಾತ್ರ ಆಯಾ ಪ್ರಸಂಗದ ಸಹಾಯಧನದ ಸಿಂಹಪಾಲನ್ನು ಸಲ್ಲಿಸುವ ಮೂಲಕ ನಮ್ಮ ಕೆಲಸದಲ್ಲಿ ನಂಬಿಕೆ ಇಟ್ಟು ಸಹಕರಿಸಿದ ಅವರಿಗೆ ನಾವು ಅರ್ಥವತ್ತಾಗಿ ಕೃತಜ್ಞತೆ ಸಲ್ಲಿಸುವುದು ಈ ಅಕಾಡೆಮಿಯ ಯೋಜನೆಯ ಮೂಲಕ ಸಾಧ್ಯವಾಗಿದೆ. ಉಳಿದ ಹಣವನ್ನು ಸಂಸ್ಥೆಯ ಕಾನೂನು ಪಾಲನೆ ನಿರ್ವಹಣೆ, ಸಂಪನ್ಮೂಲಗಳ ಖರ್ಚು ಮತ್ತು ಮುಂದಿನ ಮಹತ್ವಾಕಾಂಕ್ಷಿ  ಯೋಜನೆಗಳ ಸುತ್ತಲಿನ ಅರ್ಥವತ್ತಾದ  ವೆಚ್ಚಗಳಿಗೆ ಮೀಸಲಿಡುತ್ತಿದ್ದೇವೆ.
ಈ ಮೂಲಕ, ಸ್ವಯಂಸೇವೆಯಲ್ಲೇ ಸಲ್ಲುತ್ತಿರುವ ನೂರಾರು ಮಂದಿಗಳ ಶ್ರಮದಾನವನ್ನು ಹಣದಿಂದ ಅಳೆಯದೇ ಅವರ ಸೇವೆಯನ್ನು ಮತ್ತೊಮ್ಮೆ ನೆನೆಸಿಕೊಂಡು ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇವೆ.  ನಾವು ಕೆಲಸ ಮಾಡುವ ನಿಮಿತ್ತ ಒಟ್ಟು ಸೇರಿದಾಗ ಬರುವ ಕಾಫಿ ತಿಂಡಿ ಊಟಗಳ ಖರ್ಚುಗಳನ್ನೂ ಕೂಡಾ ಸಂಸ್ಥೆಯಿಂದ ಭರಿಸದೇ, ನಮ್ಮ ನಮ್ಮ ಕಿಸೆಯಿಂದ ಕೊಡುವ ಮೂಲಕ ನಡೆಯುತ್ತಿರುವ ಸ್ವಯಸೇವೆಗೆ ಹೆಚ್ಚಿನ ಘನಸ್ತಿಕೆಯನ್ನು ಕೊಡುತ್ತಿರುವುದಲ್ಲದೇ, ಸಂಸ್ಥೆಯಲ್ಲಿ ಕೃಮೇಣ ಈ ರೀತಿಯ ಸಹಾಯಧನ ಇಲ್ಲಾ ಈವರೆಗೆ  ಬಂದ ಮತ್ತು ಮಂದೆ ದಾನಿಗಳಿಂದ ಬರಬಹುದಾದ ಯಾವುದೇ  ಅನುದಾನದ ಹಣವನ್ನು ಕೂಡಾ ಯಕ್ಷಗಾನ ಕುರಿತಾದ ಅಂತರಜಾಲ ದಾಖಲೀಕರಣಕ್ಕೆ ಸಂಬಂಧಿಸಿದ ಯೋಜನೆಗಳ ಸುತ್ತ ಅನಿವಾರ್ಯ ಖರ್ಚುಗಳಿಗೆ ಮಾತ್ರ ಮೀಸಲಿಟ್ಟು, ಒಂದು ಪೈಸೆಯೂ ಕೂಡಾ ಪೋಲಾಗದ ಹಾಗೆ ಕಟ್ಟೆಚ್ಚರ ವಹಿಸುತ್ತಿದ್ದೇವೆ. ಇದನ್ನು ಬರೇ ಮಾತಲ್ಲೇ ಮುಗಿಸದೇ, ನಮ್ಮ ಹಣಕಾಸಿನ ವಾರ್ಷಿಕ  ವರದಿಗಳನ್ನು ಮುಂದೆ ಸಾರ್ವಜನಿಕಗೊಳಿಸುವ ಮೂಲಕ ಕೃತಿಯಲ್ಲೂ ತೋರಿಸಲಿದ್ದೇವೆ.   ಆ ಕಾರಣವಾಗಿಯೇ ಸ್ವಯಂಸೇವೆಯೇ ಯಕ್ಷವಾಹಿನಿಯ ಮುಖ್ಯವಾಹಿನಿಯಾಗಿ ಮುಂದುವರಿಯುತ್ತದೆ. ಗೃಹಿಣಿಯರು, ವೃತ್ತಿ ನಿರತರು, ನಿವೃತ್ತಿಯವರು, ಟೆಕ್ಕಿಗಳು ಅಲ್ಲದೇ, ಅನೇಕ  ಪ್ರಸಿದ್ಧ  ಯಕ್ಷಗಾನ ಪ್ರಸಂಗ ಕವಿಗಳು, ಕಲಾವಿದರು, ವಿದ್ವಾಂಸರು, ಸಂಶೋಧಕರು ಕೂಡಾ ನಮ್ಮ ಸ್ವಯಂಸೇವಕಮಂಡಳಿಯಲ್ಲಿ ಸೇರಿಹೋಗಿದ್ದು, ಈ ಸಮೂಹದ ಸುತ್ತಲಿನ ಪ್ರಭಾವಳಿಯನ್ನು ತಮ್ಮ ಇರವು ಮತ್ತು ಕೆಲಸಗಳ ಮೂಲಕ ಮತ್ತಷ್ಟು ಹೆಚ್ಚಿಸಿದ್ದಾರೆ.   ಒಟ್ಟಿನಲ್ಲಿ ಎಲ್ಲಾ ಸ್ವಯಂಸೇವಕರು ಯಕ್ಷಗಾನದ ಚರಿತ್ರೆಯಲ್ಲಿ ಈ ಯೋಜನೆಗಳ ಸುತ್ತಲಿನ ಅಪೂರ್ವ  ಜ್ಞಾನದಾನ, ಶ್ರಮದಾನ, ಸಮಯದಾನ ಮತ್ತು ಆ ಕುರಿತಾಗಿ ಬರುವ ಕಿಂಚಿತ್‌ ಖರ್ಚುಗಳ ತ್ಯಾಗಗಳ ಮೂಲಕ "ಯಕ್ಷವೀರ"ರಾಗಿಯೇ ಉಳಿದು ಬೆಳೆಯುತ್ತಾ ಹೋಗುತ್ತಾರೆ.  ಹಾಗಾಗಿಯೇ, ಎಲ್ಲಾ ಪ್ರಸಂಗಗಳ ಸುತ್ತಲಿನ ಸ್ವಯಂಸೇವಕರ ಸೇವೆಯನ್ನು ಕೊನೆಯ ಪುಟದಲ್ಲಿ ಕೃತಜ್ಞತೆಗಳು ಎಂಬ ಶೀರ್ಷಿಕೆಯಡಿ ನಮೂದಿಸುವುದು ನಮಗೆ ಧಾರ್ಮಿಕವಾದ ಕೆಲಸವಾಗಿದೆ. ಈ ಕುರಿತಾಗಿ  ನಮ್ಮಿಂದ  ತಪ್ಪುಗಳಾಗಿ ಕೆಲವರ ಹೆಸರು ಬಿಟ್ಟು ಹೋಗಿದ್ದರೆ, ಕೂಡಲೇ ನಮ್ಮ ಗಮನಕ್ಕೆ ತನ್ನಿ.

ನಿಮ್ಮೆಲ್ಲರ ಎಂದಿನ ಸಹಕಾರ ಸೇವೆಗಳಿಗೆ ನಮಿಸುವ,
- ನಟರಾಜ ಉಪಾಧ್ಯ, ಯಕ್ಷಪ್ರಸಂಗಯೋಜನೆ ನಾಯಕತ್ವ ತಂಡ ಹಾಗೂ ಯಕ್ಷವಾಹಿನಿ ವಿಶ್ವಸ್ಥರ ಪರವಾಗಿ

ಅಕಾಡೆಮಿ ಕಾರ್ಯಕ್ರಮ ಕುರಿತಾದ ಕೆಲವೇ ಚಿತ್ರಮಾಹಿತಿಗಳನ್ನು ಕೆಳಗೆ ಕೊಡಲಾಗಿದೆ.



ಚಿತ್ರಕೃಪೆ - ತೀರ್ಥಳ್ಳಿ ರಾಘವೇಂದ್ರ ಅಡಿಗ


No comments:

Post a Comment

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...