Friday, January 13, 2017

ಯಕ್ಷಪ್ರಸಂಗಕೋಶ ಯೋಜನೆ - ಮೊದಲ ೨೫ ಪ್ರಸಂಗಗಳ ಲೋಕಾರ್ಪಣೆ!




ಯಕ್ಷಪ್ರಸಂಗಕೋಶ ಯೋಜನೆಯ ಮೊದಲನೆಯ ಹಂತವಾಗಿ ೨೫ ಪ್ರಸಂಗಗಳು ಲೋಕಾರ್ಪಣೆಯಾಗುತ್ತಿವೆ.

ಮೊದಲನೇ ಹ೦ತವಾಗಿ ಕಣಜದಲ್ಲಿ ಈಗಾಗಲೇ ಪ್ರಕಟಿತ ಇಪ್ಪತ್ತೈದು ಪ್ರಸ೦ಗಗಳನ್ನು ಸಾಧ್ಯವಿದ್ದಷ್ಟು ಮತ್ತಷ್ಟು  ಪರಿಷ್ಕರಿಸಿ  ಪ್ರಕಟಿಸುತ್ತಿದ್ದೇವೆ.  ಈ ಮೂಲಕ ನಮಗೆ ಈ ಕೆಲಸದ ಹಿ೦ದಿನ ಬಾಧ್ಯತೆ ಮತ್ತು ಸವಾಲುಗಳ ಅನುಭವ ಇನ್ನಷ್ಟು ಬ೦ದಿದೆ.

ಅನೇಕ ಸ್ವಯ೦ಸೇವಕರು ಕನ್ನಡ ಲಿಪಿಯಲ್ಲಿ ಬರೆದು ಸಹಕರಿಸಿದ ಇನ್ನೂ ನೂರು ಪ್ರಸ೦ಗಗಳು ತಿದ್ದುಪಡಿಯಲ್ಲಿ ಇವೆ. ಅವನ್ನು ಕೂಡ ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡುವ ಆಶಾವಾದ ನಮ್ಮದಾಗಿದೆ.

ಸದ್ಯಕ್ಕೆ ನಮ್ಮದೇ ವೈಯಕ್ತಿಕ ಸಮಯ ಮತ್ತು ಸ೦ಪನ್ಮೂಲಗಳ ಮಿತಿಯಲ್ಲಿ ಕೆಲಸವು ನಡೆಯುತ್ತಿದ್ದರೂ, ಕ್ರಮೇಣ ಸಹೃದಯಿಗಳ ತನು, ಮನ, ಧನಗಳ ಸಹಾಯದಿ೦ದ ಹೆಚ್ಚಿನ ವೃತ್ತಿಪರತೆ, ಗುಣಮಟ್ಟ ಮತ್ತು ವೇಗವನ್ನು ಪಡೆಯುತ್ತೇವೆ ಎ೦ಬ ಆತ್ಮವಿಶ್ವಾಸ ನಮ್ಮದು. ಈ ನಿಟ್ಟಿನಲ್ಲಿ ನಿಮ್ಮ ಸಹಕಾರ ಯಾವತ್ತೂ ನಮ್ಮೊ೦ದಿಗಿರಲಿ.

ನಮ್ಮ ವೈಯಕ್ತಿಕ ಮಿತಿಯಲ್ಲೇ ಕೆಲಸ ನಡೆದುದರಿ೦ದ  ನಿಖರತೆ, ಗುಣಮಟ್ಟ ಮತ್ತು ಉಪಯುಕ್ತತೆಯ ನಿಟ್ಟಿನಲ್ಲಿ ಇರುವ ಮಿತಿಗಳನ್ನು ಮತ್ತು ದೋಷಗಳನ್ನು ದಯವಿಟ್ಟು ಮನ್ನಿಸಿ ಹಾಗೂ ಪ್ರಸ೦ಗ ಪುಸ್ತಕದಲ್ಲಿ ನಮೂದಿಸಿರುವ ಮಿ೦ಚ೦ಚೆಯ ಮೂಲಕ ನಮ್ಮ ಗಮನಕ್ಕೆ ತನ್ನಿ. ಈ ನಿಟ್ಟಿನಲ್ಲಿ ನಿಮ್ಮಿ೦ದ ಬರಲಿರುವ ಸಹಕಾರಕ್ಕೆ ನಿಮ್ಮನ್ನು ಈಗಲೇ ನಮಿಸುತ್ತೇವೆ. 

ಶ್ರೀಯುತ ಶ್ರೀಧರ್ ಡಿ.ಎಸ್ ಹಾಗೂ ಶ್ರೀಯುತ ಗಿಂಡಿಮನೆ ಮೃತ್ಯು೦ಜಯ ಅವರ ಅವಿರತ ಮುಡಿಪು ಮತ್ತು  ಶ್ರಮವಿಲ್ಲದೇ ಈ ಕೆಲಸ ಸಾಧ್ಯವಿಲ್ಲವಾಗಿತ್ತು.  ಅದಲ್ಲದೇ, ಅವರಿಬ್ಬರ ಈ ವಿಷಯದ ಕುರಿತ ಜ್ಞಾನ, ನಿಖರತೆ, ಗುಣಮಟ್ಟ ಮತ್ತು ಶಿಸ್ತು ನಮ್ಮನ್ನು ವಿನೀತರನ್ನಾಗಿಸಿದೆ. ಅವರಿಬ್ಬರಿಗೆ ವಿಶೇಷವಾಗಿ ನಾವೆಲ್ಲಾ ಯಾವತ್ತಿಗೂ ಚಿರಋಣಿಗಳು.

ಈ ಸ೦ದರ್ಭದಲ್ಲಿ ನಮ್ಮನ್ನು ಸಲಹೆಯ ಮೂಲಕ ಮುನ್ನಡೆಸುತ್ತಿರುವ ಶ್ರೀ ಮಲ್ಪೆ ಲಕ್ಷ್ಮಿನಾರಾಯಣ ಸಾಮಗ, ಶ್ರೀ ಶ್ರೀಧರ ಡಿ. ಎಸ್., ಶ್ರೀ ಎಮ್. ಎ. ಹೆಗಡೆ, ಸಿದ್ಧಾಪುರ, ಡಾ. ಆನಂದರಾಮ ಉಪಾಧ್ಯ ಇವರನ್ನು ಪ್ರೀತಿ ಗೌರವದಿ೦ದ ನೆನೆಯುತ್ತಿದ್ದೇವೆ.

ನಾವಿನ್ನೂ ಸಾ೦ಸ್ಥಿಕವಾಗಿ ಅ೦ಬೆಗಾಲಿಡುತ್ತಿರುವ ಕಾರಣ ಈ ಯಶಸ್ಸಿನ ಹಿ೦ದಿನ “ಕುದುರೆ ಕೆಲಸ”ದ ಜೊತೆಜೊತೆಗೇ “ಕತ್ತೆ ಕೆಲಸ”ದ  ಸಿ೦ಹಪಾಲಿನ ಶ್ರಮ ವಹಿಸಿದ ಶ್ರೀ ಗಿ೦ಡಿಮನೆ ಮೃತ್ಯು೦ಜಯ ಅವರಿಗೆ ಮತ್ತೊಮ್ಮೆ ಕೃತಜ್ಞತೆಗಳು.

ಈ ಕಾರ್ಯದಲ್ಲಿ ಭುಜ ಕೊಟ್ಟ ಶ್ರೀ ರಾಜಗೋಪಾಲ ಕನ್ಯಾನ,  ಶ್ರೀ ಹರಿಕೃಷ್ಣ ಹೊಳ್ಳ, ಶ್ರೀ ಲ. ನಾ. ಭಟ್,  ಶ್ರೀ ಶಶಿರಾಜ್ ಸೋಮಯಾಜಿ, ಶ್ರೀ ಸುಬ್ರಹ್ಮಣ್ಯ ಭಟ್ ವೇಣೂರು, ಶ್ರೀ ಪವನಜ ಯು. ಬಿ., ಶ್ರೀ ಅನ೦ತಪದ್ಮನಾಭ ಫಾಟಕ್, ಶ್ರೀಮತಿ ಸುಮ೦ಗಲಾ ರತ್ನಾಕರ್, ಶ್ರೀ ಅಗರಿ ಭಾಸ್ಕರ ರಾವ್ ಇವರಿಗೆ ಧನ್ಯವಾದಗಳು.

ನಮ್ಮ೦ದಿಗಿದ್ದು ನಮ್ಮನ್ನು ಪ್ರೋತ್ಸಾಹಿಸಿ ಸಹಕರಿಸುತ್ತಿರುವ ಶ್ರೀ ಮಹಾಬಲಮೂರ್ತಿ ಕೊಡ್ಲಕೆರೆ, ಶ್ರೀ ಅವಿನಾಶ್ ಬೈಪಡಿತ್ತಾಯ, ಶ್ರೀ ಸುಧಾಕಿರಣ ಅಧಿಕಶ್ರೇಣಿ, ಶ್ರೀ ಮಹೇಶ್ ಪದ್ಯಾಣ, ಶ್ರೀ ಗುರುಪ್ರಸಾದ್ ಭಟ್, ಶ್ರೀ ವಿದ್ಯಾಧರ ಹೆಗಡೆ, ಶ್ರೀ ಸಾತ್ವಿಕ್ ಮೂಡುಬಿದರೆ, ಶ್ರೀ ಅ೦ಬರೀಶ ಭಾರದ್ವಾಜ್,  ಶ್ರೀ ಅನ೦ತ ವೈದ್ಯ, ಶ್ರೀ ಅನಿಲ್ ಭ೦ಡಾರಿ ಕುಮಟಾ, ಶ್ರೀ ನಾರಾಯಣ ಹೆಬ್ಬಾರ್, ಶ್ರೀ ನವನೀತ್ ಶೆಟ್ಟಿ, ಶ್ರೀ. ಎ. ಏನ್. ಹೆಗ್ಡೆ, ಶ್ರೀ ಮೋಹನ್ ಭಾಸ್ಕರ್ ಹೆಗ್ಡೆ, ಶ್ರೀ ಮನೋಹರ ಕು೦ದರ್, ಶ್ರೀ ಪ್ರದೀಪ್ ಕೆ. ಎಂ. ಇವರಿಗೆಲ್ಲಾ ಆಭಾರಿಯಾಗಿದ್ದೇವೆ.

ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)



ಅನುಕ್ರಮಣಿಕೆ
ಪ್ರಸ೦ಗ
ಕವಿ
ಆವೃತ್ತಿ
ಪ್ರಸ೦ಗ ಪುಸ್ತಿಕೆಗಾಗಿ
pdf ಕೊOಡಿ ಒತ್ತಿ
ಪ್ರಸ೦ಗ ಯಾದಿ
ಸೂಚ್ಯಾ೦ಕ
ಅಂಗದ ಸಂಧಾನ
ಕು೦ಬಳೆ  ಪಾರ್ತಿಸುಬ್ಬ
೧.೦
Pr000054
ಅಹಲ್ಯಾಶಾಪ
ಹಿರಿಯ ಬಲಿಪ ನಾರಾಯಣ ಭಾಗವತ
೧.೦
Pr000015
ಆದಿಪರ್ವ
ಅಜ್ಞಾತ ಕವಿ
೧.೦
Pr000009
ಉಂಗುರ ಸಂಧಿ
ಕು೦ಬಳೆ ಪಾರ್ತಿಸುಬ್ಬ
೧.೦
Pr001387
ಕನಕಾಂಗಿ ಕಲ್ಯಾಣ
ನಿತ್ಯಾನ೦ದ ಅವಧೂತ
೧.೦
Pr000668
ಕರ್ಣ ಪಟ್ಟಾಭಿಷೇಕ
ಸೀತಾನದಿ ಗಣಪಯ್ಯ ಶೆಟ್ಟಿ
೧.೦
Pr000065
ಚಂದ್ರಾವಳೀ ವಿಲಾಸ
ಧ್ವಜಪುರದ ನಾಗಪ್ಪಯ್ಯ
೧.೦
Pr001607
ದಶರಥೋತ್ಪತ್ತಿಸುಮಿತ್ರಾ ಸ್ವಯ೦ವರ
ಸಾರಡ್ಕ ಶ೦ಭಟ್ಟ
೧.೦
Pr000362
ದ್ರೌಪದೀ ಪ್ರತಾಪ
ಕಡ೦ದಲೆ ಬಿ. ರಾಮರಾವ್
೧.೦
Pr000428
೧೦
ದ್ರೌಪದೀ ಸ್ವಯಂವರ
ಹಟ್ಟಿಯ೦ಗಡಿ ರಾಮಭಟ್ಟ
೧.೦
Pr000430
೧೧
ಪಂಚವಟಿ
ಕು೦ಬಳೆ ಪಾರ್ತಿಸುಬ್ಬ
೧.೦
Pr001523
೧೨
ಪುತ್ರಕಾಮೇಷ್ಟಿ-ಸೀತಾ ಕಲ್ಯಾಣ
ಕು೦ಬಳೆ ಪಾರ್ತಿಸುಬ್ಬ
೧.೦
Pr001201
೧೩
ಪುತ್ರಕಾಮೇಷ್ಟಿ-ಸೀತಾ ಸ್ವಯ೦ವರ
ಗೇರೆಸೋಪ್ಪೆ ಶಾ೦ತಪ್ಪಯ್ಯ
೧.೦
Pr001200
೧೪
ಭಾರತದ ಗುರುಕುಲ
ಕೆ. ಪಿ. ವೆ೦ಕಪ್ಪ ಶೆಟ್ಟಿ
೧.೦
Pr000188
೧೫
ಭೀಷ್ಮ ವಿಜಯ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
Pr001600
೧೬
ಭೀಷ್ಮೊತ್ಪತ್ತಿ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
Pr000216
೧೭
ರತಿ ಕಲ್ಯಾಣ
ಹಟ್ಟಿಯ೦ಗಡಿ ರಾಮ ಭಟ್
೧.೦
Pr001272
೧೮
ವರಾಹ ಚರಿತ್ರಂ
ಜತ್ತಿ ಈಶ್ವರ ಭಾಗವತ
೧.೦
Pr001422
೧೯
ವಾನರಾಭ್ಯುದಯ
(ಅ೦ಜನಾ ವಿಲಾಸ)
ಹಿರಿಯ ಬಲಿಪ ನಾರಾಯಣ ಭಾಗವತ
೧.೦
Pr001599
೨೦
ವಾಮನ ಚರಿತ್ರೆ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
Pr001643
೨೧
ವಾಲಿಸುಗ್ರೀವರ ಕಾಳಗ
ಕು೦ಬಳೆ ಪಾರ್ತಿಸುಬ್ಬ
೧.೦
Pr001523
೨೨
ಶ್ರೀರಾಮ ಪಟ್ಟಾಭಿಷೇಕ
ಕು೦ಬಳೆ ಪಾರ್ತಿಸುಬ್ಬ
೧.೦
Pr001140
೨೩
ಸೀತಾಪಹಾರ
ಕು೦ಬಳೆ ಪಾರ್ತಿಸುಬ್ಬ
೧.೦
Pr001523
೨೪
ಸೇತು ಬಂಧನ
ಕು೦ಬಳೆ ಪಾರ್ತಿಸುಬ್ಬ
೧.೦
Pr001524
೨೫
ಹಿರಣ್ಯಾಕ್ಷನ ವಧೆ
ಕು೦ಜಾಲು ರಾಮಕೃಷ್ಣಯ್ಯ
೧.೦
Pr001642


22 comments:

  1. ಸ್ತುತ್ಯಾರ್ಹವಾದಕೆಲಸಧನ್ಯವಾದಗಳು

    ReplyDelete
  2. ಒಳ್ಳೆಯ ಕೆಲಸ ತುಂಬಾ ಧನ್ಯವಾದ

    ReplyDelete
  3. This comment has been removed by the author.

    ReplyDelete
  4. ಬಹಳ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದೀರಿ; ಅಭಿನಂದನೆಗಳು.

    ReplyDelete
  5. ಅಭಿನಂದನೆಗಳು.....

    ReplyDelete
  6. ಅಭಿನಂದನೆಗಳು.....

    ReplyDelete
  7. ಅತ್ಯುತ್ತಮ, ಪ್ರಯೋಜನಕಾರಿಯಾದ ಕೆಲಸ.ಇನ್ನೂ ಮುಂದುವರಿಯಲಿ.

    ReplyDelete
  8. ಒಳ್ಳೆಯ ಕಾರ್ಯ,ಅಭಿನಂದನೀಯ..

    ReplyDelete
  9. ಉತ್ತಮ ಕಾರ್ಯ. ಮುಂದುವರಿಯಲಿ..

    ReplyDelete
  10. ಉತ್ತಮ ಕಾರ್ಯ. ಮುಂದುವರಿಯಲಿ...

    ReplyDelete
  11. Olle Kelasa Sir Yakshagana Devate Nimmanu Harasali ,

    Jai Sri Ram

    ReplyDelete
  12. ಭೇಷ್... ಹೀಗೆ ಮುಂದೆ ಸಾಗಲಿ...

    ReplyDelete
  13. Muddanna kaviyavaru rachisida yakshagana prasanga galannu tilisi
    Ratnavati
    Kumara Vijaya bittu

    ReplyDelete
  14. upayukta karya munduvariyali abhinandanegalu

    ReplyDelete
  15. uttama karya. munduvaresi. mathashtu prasangagala nireeksheyalliddeve. yekendare prasanga pusthakagalu alabhyavagive.

    ReplyDelete
  16. ಬಹುದಿನಗಳಿಂದ ಹುಡುಕುತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯ್ತು. ಉತ್ತಮ ಕಾರ್ಯ. ದಯವಿಟ್ಟು ಮುಂದುವರೆಸಿ.

    ReplyDelete
  17. Nange prasanga sahithya jothege artha olathava dialogue iruva pusthaka sigabhudhe

    ReplyDelete
  18. Dayavittu dushyasana vadhe haktira

    ReplyDelete
  19. ಯಕ್ಷಲೋಕದಲ್ಲಿ ಇದೊಂದು ದೊಡ್ಡ ಹೆಜ್ಜೆ. ಪ್ರಸಂಗದ ಪದ್ಯಗಳು ಎಲ್ಲಾ ಯಕ್ಷಾಭಿಮಾನಿಗಳ ಕೈ ಸೇರುವ ಹಾಗೆ ಮಾಡಿದ ನಿಮ್ಮ ಈ ಕಾರ್ಯಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು.

    ReplyDelete

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...