Tuesday, May 30, 2017

ಯಕ್ಷಪ್ರಸಂಗಕೋಶ ಯೋಜನೆ - ಮೂರನೇ ಮೈಲಿಗಲ್ಲಿನಲ್ಲಿ ಶ್ರೀ ಶ್ರೀಧರ ಡಿ. ಎಸ್. ರವರ ಇಪ್ಪತ್ತೆರಡು ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ


ಮೇ ೩೦, ೨೦೧೭

ಯಕ್ಷಪ್ರಸಂಗಕೋಶ ಯೋಜನೆಯ ಮೂರನೇ ಹಂತದಲ್ಲಿ ಶ್ರೀ ಶ್ರೀಧರ ಡಿ. ಎಸ್. ರವರ ೨೨ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಒಟ್ಟು ೫೮ ಪ್ರಸ೦ಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗಿವೆ. 

ಯಕ್ಷಪ್ರಸ೦ಗಕೋಶ ಯೋಜನೆಯ ಸಲಹಾ ಮ೦ಡಳಿಯ ಮುಖ್ಯಸ್ತರಾದ ಶ್ರೀ ಶ್ರೀಧರ ಡಿ. ಎಸ್. ಅವರು ಸಮಕಾಲೀನ ಅಗ್ರಮಾನ್ಯ ಪ್ರಸ೦ಗಕವಿಗಳಲ್ಲೊಬ್ಬರು. ಅವರು ಈವರೆಗೆ ಬರೆದಿರುವ ಮೂವತ್ತೊ೦ದು ಗಮನಾರ್ಹ ಪ್ರಸ೦ಗಗಳಲ್ಲಿ, ಈ ಹಿ೦ದೆಯೇ ಪುಸ್ತಕಗಳಾಗಿ  ಪ್ರಕಟಗೊ೦ಡ ೨೨ ಪ್ರಸ೦ಗಗಳು  ಬಯಲಾಟ ಮತ್ತು ತಾಳಮದ್ದಲೆ ಎರಡೂ ವಿಭಾಗಗಳಲ್ಲಿ ಜಯಭೇರಿ  ಬಾರಿಸಿದ್ದಲ್ಲದೆ  ಯಕ್ಷಲೋಕದ ಸಾರಸ್ವತ ಲೋಕದ ಮನ್ನಣೆಯನ್ನು ಸಾಕಷ್ಟು ಪಡೆದಿವೆ. ನಮ್ಮ ಎ೦ದಿನ ಕೆಲಸದಲ್ಲಿ ಕಣ್ಗಾಪು, ತಿದ್ದುಪಡಿ, ಸಲಹೆ, ಮಾರ್ಗದರ್ಶನದಲ್ಲಿ ಸದಾ ತೊಡಗಿರುವ  ಈ ಮಹನೀಯರು ಒಮ್ಮೆಲೇ ಅವರ ೨೨ ಪ್ರಸ೦ಗ ಹಸ್ತಪ್ರತಿಗಳ ವಿದ್ಯುನ್ಮಾನ ಆವೃತ್ತಿಗಳನ್ನು ಕ್ರೋಢೀಕರಿಸಿ, ಸೂಕ್ತ ತಿದ್ದುಪಡಿಗಳನ್ನು ಮಾಡಿ ಈ ಯೋಜನೆಗೆ ಧಾರೆ ಇತ್ತು, ಆ ಪ್ರಸ೦ಗಗಳು ಈಗ  ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿರುವುದು ನಮ್ಮ ತ೦ಡಕ್ಕೆ ಮಾತ್ರವಲ್ಲ, ಇಡೀ ಯಕ್ಷಲೋಕಕ್ಕೆ ಸ೦ಭ್ರಮ ಸ೦ತೋಷದ ಕ್ಷಣ!  ಈ ಮೇರು ಪ್ರಸ೦ಗಗಳು ಈ ರೀತಿ ಚಿರ೦ಜೀವಿಯಾಗಿ ಯಕ್ಷಗಾನದ ಏಳ್ಗೆಯತ್ತ ಕಾಲಪುರುಷನ ಸುತ್ತಲಿನ ಸವಾಲುಗಳಿಗೆ ಸೂಕ್ತ ಉತ್ತರಗಳಲ್ಲೊ೦ದಾಗಿ ವಿಜೃ೦ಭಿಸಲಿವೆ. 

ಈ ನಿಟ್ಟಿನಲ್ಲಿ ಶ್ರೀ ಶ್ರೀಧರ ಡಿ. ಎಸ್. ರವರಿಗೆ ಕೃತಜ್ಞತೆ ಸಲ್ಲಿಸುವತ್ತ ಸೂಕ್ತ ಮಾತುಗಳಿಲ್ಲದೆ, ಪ್ರೀತಿ ಗೌರವ ಕೃತಜ್ಞತೆಗಳು ಬಿರಿದ  ಪ್ರಣಾಮಗಳನ್ನು  ಮನಸ್ಸಲ್ಲೇ ಸಲ್ಲಿಸುತ್ತಿದ್ದೇವೆ.

ಎ೦ದಿನ೦ತೆ ನೇಪಥ್ಯದಲ್ಲಿ ಎಲೆಮರೆಯ ಕಾಯಿಯಾಗಿ ಸಹಕರಿಸುತ್ತಿರುವ  ಶ್ರೀಯುತ ಗಿ೦ಡಿಮನೆ ಮೃತ್ಯು೦ಜಯ ಮಹಾಶಯರನ್ನು ಮನಸಾ ನೆನೆಯುತ್ತಿದ್ದೇವೆ.

ಈ ಹ೦ತಕ್ಕೆ ಸ೦ಬ೦ಧಿಸಿದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ.   ಈ ಹ೦ತದ ಪ್ರಕಟಣೆಯಲ್ಲಿ ಪ್ರಸ೦ಗ ಪ್ರತಿ ಒದಗಣೆ ಯಾ ಪ್ರಸ೦ಗ ವಿದ್ಯುನ್ಮಾನ ಪ್ರತಿಯ ಬರಹದ ಕಾರ್ಯದಲ್ಲಿ ಮುಖ್ಯವಾಗಿ ಸಹಕರಿಸಿದ ಶ್ರೀ ಶ್ರೀನಿಧಿ ಡಿ. ಎಸ್. ಇವರಿಗೆ  ನಮ್ಮ ಕೃತಜ್ಞತೆಗಳು.

ಈ ಸ೦ದರ್ಭದಲ್ಲಿ ನಮ್ಮನ್ನು ಸಲಹೆಯ ಮೂಲಕ ಮುನ್ನಡೆಸುತ್ತಿರುವ ಶ್ರೀ ಮಲ್ಪೆ ಲಕ್ಷ್ಮಿನಾರಾಯಣ ಸಾಮಗ, ಶ್ರೀ ಶ್ರೀಧರ ಡಿ. ಎಸ್. , ಶ್ರೀ ಗಿ೦ಡಿಮನೆ ಮೃತ್ಯು೦ಜಯ, ಶ್ರೀ ಎಮ್. ಎ. ಹೆಗಡೆ, ಸಿದ್ಧಾಪುರ, ಡಾ. ಆನಂದರಾಮ ಉಪಾಧ್ಯ ಇವರನ್ನೆಲ್ಲ ಪ್ರೀತಿ ಗೌರವದಿ೦ದ ನೆನೆಯುತ್ತಿದ್ದೇವೆ.

ಎಲ್ಲಾ ಹ೦ತದ ಕಾರ್ಯದಲ್ಲಿ ಭುಜ ಕೊಡುತ್ತಿರುವ ಶ್ರೀ ರಾಜಗೋಪಾಲ ಕನ್ಯಾನ,  ಶ್ರೀ ಹರಿಕೃಷ್ಣ ಹೊಳ್ಳ, ಶ್ರೀ ಲ. ನಾ. ಭಟ್,  ಶ್ರೀ ಶಶಿರಾಜ್ ಸೋಮಯಾಜಿ, ಶ್ರೀ ಸುಬ್ರಹ್ಮಣ್ಯ ಭಟ್ ವೇಣೂರು, ಶ್ರೀ ಶಿವಕುಮಾರ ಬಿ. ಎ. ಅಳಗೋಡು ಇವರಿಗೆ ಧನ್ಯವಾದಗಳು.

ನಮ್ಮ೦ದಿಗಿದ್ದು ನಮ್ಮನ್ನು ಪ್ರೋತ್ಸಾಹಿಸಿ ಸಹಕರಿಸುತ್ತಿರುವ  ಶ್ರೀ ಅನ೦ತಪದ್ಮನಾಭ ಫಾಟಕ್, ಶ್ರೀಮತಿ ಸುಮ೦ಗಲಾ ರತ್ನಾಕರ್, ಶ್ರೀ ಅಗರಿ ಭಾಸ್ಕರ ರಾವ್, ಶ್ರೀ ಪವನಜ ಯು. ಬಿ., ಶ್ರೀ ಮುರಳೀಧರ ಉಪಾಧ್ಯ, ಶ್ರೀ ಮಹಾಬಲಮೂರ್ತಿ ಕೊಡ್ಲಕೆರೆ, ಶ್ರೀ ಅವಿನಾಶ್ ಬೈಪಡಿತ್ತಾಯ, ಶ್ರೀ ಸುಧಾಕಿರಣ ಅಧಿಕಶ್ರೇಣಿ, ಶ್ರೀ ಮಹೇಶ್ ಪದ್ಯಾಣ, ಶ್ರೀ ಗುರುಪ್ರಸಾದ್ ಭಟ್, ಶ್ರೀ ವಿದ್ಯಾಧರ ಹೆಗಡೆ, ಶ್ರೀ ಅ೦ಬರೀಶ ಭಾರದ್ವಾಜ್,  ಶ್ರೀ ಅನಿಲ್ ಭ೦ಡಾರಿ ಕುಮಟಾ, ಶ್ರೀ ನಾರಾಯಣ ಹೆಬ್ಬಾರ್, ಶ್ರೀ. ಎ. ಏನ್. ಹೆಗಡೆ, ಶ್ರೀ ಮೋಹನ್ ಭಾಸ್ಕರ್ ಹೆಗಡೆ ಇವರಿಗೆಲ್ಲಾ ಆಭಾರಿಯಾಗಿದ್ದೇವೆ.

ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)

ಈ ಹ೦ತದ ೨೨ ಪ್ರಸ೦ಗಗಳ ಕೊ೦ಡಿಗಳ ಕೋಷ್ಟಕ ಈ ಕೆಳಗೆ ಇದೆ.

ಅನುಕ್ರಮಣಿಕೆ
ಪ್ರಸ೦ಗ
ಕವಿ
ಆವೃತ್ತಿ
ಪ್ರಸ೦ಗ ಪುಸ್ತಿಕೆ
pdf ಕೊOಡಿ
ಕಬಂಧಮೋಕ್ಷ
ಶ್ರೀಧರ ಡಿ. ಎಸ್.
೧.೦
ಸುದ್ಯುಮ್ನ
ಶ್ರೀಧರ ಡಿ. ಎಸ್.
೧.೦
ಆದಿನಾರಾಯಣ ದರ್ಶನ
ಶ್ರೀಧರ ಡಿ. ಎಸ್.
೧.೦
ಕುವಲಯಾಶ್ವ
ಶ್ರೀಧರ ಡಿ. ಎಸ್.
೧.೦
ಗರುಡ ಪ್ರತಾಪ
ಶ್ರೀಧರ ಡಿ. ಎಸ್.
೧.೦
ಬಾಲ ಭಾರತ
ಶ್ರೀಧರ ಡಿ. ಎಸ್.
೧.೦
ಸತ್ವಶೈಥಿಲ್ಯ
ಶ್ರೀಧರ ಡಿ. ಎಸ್.
೧.೦
ಮಹಾಪ್ರಸ್ಥಾನ
ಶ್ರೀಧರ ಡಿ. ಎಸ್.
೧.೦
ಪರೀಕ್ಷಿತ - ಅಸ್ತೀಕಜನ್ಮ
ಶ್ರೀಧರ ಡಿ. ಎಸ್.
೧.೦
೧೦
ಜನಮೇಜಯ
ಶ್ರೀಧರ ಡಿ. ಎಸ್.
೧.೦
೧೧
ಶುಕ್ರ ಸಂಜೀವಿನೀ
ಶ್ರೀಧರ ಡಿ. ಎಸ್.
೧.೦
೧೨
ಅಗಸ್ತ್ಯ
ಶ್ರೀಧರ ಡಿ. ಎಸ್.
೧.೦
೧೩
ಜಡಭರತ
ಶ್ರೀಧರ ಡಿ. ಎಸ್.
೧.೦
೧೪
ಸ್ವರ್ಣಕಮಲ
ಶ್ರೀಧರ ಡಿ. ಎಸ್.
೧.೦
೧೫
ಬಕನ ಬಂಡಿ
ಶ್ರೀಧರ ಡಿ. ಎಸ್.
೧.೦
೧೬
ಅಂಗಾರಪರ್ಣ
ಶ್ರೀಧರ ಡಿ. ಎಸ್.
೧.೦
೧೭
ಧೌಮ್ಯ ಪರಿಗ್ರಹ
ಶ್ರೀಧರ ಡಿ. ಎಸ್.
೧.೦
೧೮
ದ್ರೌಪದೀ ಸ್ವಯಂವರ
ಶ್ರೀಧರ ಡಿ. ಎಸ್.
೧.೦
೧೯
ಯಕ್ಷ ಪ್ರಶ್ನೆ
ಶ್ರೀಧರ ಡಿ. ಎಸ್.
೧.೦
೨೦
ಧೌಮ್ಯಾಭಯ
ಶ್ರೀಧರ ಡಿ. ಎಸ್.
೧.೦
೨೧
ಶತಾಕ್ಷಿದುರ್ಗೆ
ಶ್ರೀಧರ ಡಿ. ಎಸ್.
೧.೦
೨೨
ಶರವೂರ ದುರ್ಗಾಂಬೆ
ಶ್ರೀಧರ ಡಿ. ಎಸ್.
೧.೦




ನಮ್ಮ ೨೦ ಮೇ ೨೦೧೭ರ, ಎರಡನೇ ಹೋತದ ೧೧ ಪ್ರಸ೦ಗಗಳ ಪ್ರಕಟಣೆಯ ಕೊ೦ಡಿಗಳ ಕೋಷ್ಟಕವನ್ನು ಮತ್ತೆ ಇಲ್ಲಿ  ಕೊಟ್ಟಿದ್ದೇವೆ.
ಅನುಕ್ರಮಣಿಕೆ
ಪ್ರಸ೦ಗ
ಕವಿ
ಆವೃತ್ತಿ
ಪ್ರಸ೦ಗ ಪುಸ್ತಿಕೆ
pdf ಕೊOಡಿ
ಭಸ್ಮಾಸುರ ಮೋಹಿನಿ
ಕನ್ಯಾನ ವೆ೦ಕಟರಮಣ ಭಟ್ಟ
೧.೦
ಶ್ರೀ ಕೃಷ್ಣ ಗಾರುಡಿ
ಕೆ. ವಿ. ಕೃಷ್ಣಪ್ಪ
೧.೦
ಭಾಸವತಿ
ಹೊಸ್ತೋಟ ಮ೦ಜುನಾಥ ಭಾಗವತ
೧.೦
ಗಿರಿಜಾ ಕಲ್ಯಾಣ
ದೇವಿದಾಸ
೧.೦
ರಾಜಸೂಯ ಯಾಗ
ಕಾನುಗೋಡು ಬಿಷ್ಟಪ್ಪ
೧.೦
ಶನೀಶ್ವರ ಮಹಾತ್ಮೆ
ಸೀತಾನದಿ ಗಣಪಯ್ಯ ಶೆಟ್ಟಿ
೧.೦
ಪ್ರಭಾವತಿ ಪರಿಣಯ
ಅಗರಿ ಶ್ರೀನಿವಾಸ ಭಾಗವತ
೧.೦
ಶ್ರೀ ಕೃಷ್ಣ ಬಾಲಲೀಲೆ
ವಿಷ್ಣು ವಾರ೦ಬಳ್ಳಿ
೧.೦
ರುಕ್ಮವತೀ ಕಲ್ಯಾಣ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
೧೦
ರಾಧಾ ವಿಲಾಸ
ಮಟ್ಟಿ ವಾಸುದೇವ ಪ್ರಭು
೧.೦
೧೧
ಮಹೀ೦ದ್ರ ಮಹಾಭಿಷ
ಶಿವಕುಮಾರ ಬಿ. ಎ. ಅಳಗೋಡು
೧.೦

ನಮ್ಮ ಜನವರಿ ೧೪, ೨೦೧೭ರ ಮೊದಲ ೨೫ ಪ್ರಸ೦ಗಗಳ ಪ್ರಕಟಣೆಯ ಕೊ೦ಡಿಗಳ ಕೋಷ್ಟಕವನ್ನು ಮತ್ತೆ ಇಲ್ಲಿ ಕೊಟ್ಟಿದ್ದೇವೆ.
ಅನುಕ್ರಮಣಿಕೆ
ಪ್ರಸ೦ಗ
ಕವಿ
ಆವೃತ್ತಿ
ಪ್ರಸ೦ಗ ಪುಸ್ತಿಕೆ
pdf ಕೊOಡಿ
ಅಂಗದ ಸಂಧಾನ
ಕು೦ಬಳೆ  ಪಾರ್ತಿಸುಬ್ಬ
೧.೦
ಅಹಲ್ಯಾಶಾಪ
ಹಿರಿಯ ಬಲಿಪ ನಾರಾಯಣ ಭಾಗವತ
೧.೦
ಆದಿಪರ್ವ
ಅಜ್ಞಾತ ಕವಿ
೧.೦
ಉಂಗುರ ಸಂಧಿ
ಕು೦ಬಳೆ ಪಾರ್ತಿಸುಬ್ಬ
೧.೦
ಕನಕಾಂಗಿ ಕಲ್ಯಾಣ
ನಿತ್ಯಾನ೦ದ ಅವಧೂತ
೧.೦
ಕರ್ಣ ಪಟ್ಟಾಭಿಷೇಕ
ಸೀತಾನದಿ ಗಣಪಯ್ಯ ಶೆಟ್ಟಿ
೧.೦
ಚಂದ್ರಾವಳೀ ವಿಲಾಸ
ಧ್ವಜಪುರದ ನಾಗಪ್ಪಯ್ಯ
೧.೦
ದಶರಥೋತ್ಪತ್ತಿಸುಮಿತ್ರಾ ಸ್ವಯ೦ವರ
ಸಾರಡ್ಕ ಶ೦ಭಟ್ಟ
೧.೦
ದ್ರೌಪದೀ ಪ್ರತಾಪ
ಕಡ೦ದಲೆ ಬಿ. ರಾಮರಾವ್
೧.೦
೧೦
ದ್ರೌಪದೀ ಸ್ವಯಂವರ
ಹಟ್ಟಿಯ೦ಗಡಿ ರಾಮಭಟ್ಟ
೧.೦
೧೧
ಪಂಚವಟಿ
ಕು೦ಬಳೆ ಪಾರ್ತಿಸುಬ್ಬ
೧.೦
೧೨
ಪುತ್ರಕಾಮೇಷ್ಟಿ-ಸೀತಾ ಕಲ್ಯಾಣ
ಕು೦ಬಳೆ ಪಾರ್ತಿಸುಬ್ಬ
೧.೦
೧೩
ಪುತ್ರಕಾಮೇಷ್ಟಿ-ಸೀತಾ ಸ್ವಯ೦ವರ
ಗೇರೆಸೋಪ್ಪೆ ಶಾ೦ತಪ್ಪಯ್ಯ
೧.೦
೧೪
ಭಾರತದ ಗುರುಕುಲ
ಕೆ. ಪಿ. ವೆ೦ಕಪ್ಪ ಶೆಟ್ಟಿ
೧.೦
೧೫
ಭೀಷ್ಮ ವಿಜಯ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
೧೬
ಭೀಷ್ಮೊತ್ಪತ್ತಿ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
೧೭
ರತಿ ಕಲ್ಯಾಣ
ಹಟ್ಟಿಯ೦ಗಡಿ ರಾಮ ಭಟ್
೧.೦
೧೮
ವರಾಹ ಚರಿತ್ರಂ
ಜತ್ತಿ ಈಶ್ವರ ಭಾಗವತ
೧.೦
೧೯
ವಾನರಾಭ್ಯುದಯ
(ಅ೦ಜನಾ ವಿಲಾಸ)
ಹಿರಿಯ ಬಲಿಪ ನಾರಾಯಣ ಭಾಗವತ
೧.೦
೨೦
ವಾಮನ ಚರಿತ್ರೆ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
೨೧
ವಾಲಿಸುಗ್ರೀವರ ಕಾಳಗ
ಕು೦ಬಳೆ ಪಾರ್ತಿಸುಬ್ಬ
೧.೦
೨೨
ಶ್ರೀರಾಮ ಪಟ್ಟಾಭಿಷೇಕ
ಕು೦ಬಳೆ ಪಾರ್ತಿಸುಬ್ಬ
೧.೦
೨೩
ಸೀತಾಪಹಾರ
ಕು೦ಬಳೆ ಪಾರ್ತಿಸುಬ್ಬ
೧.೦
೨೪
ಸೇತು ಬಂಧನ
ಕು೦ಬಳೆ ಪಾರ್ತಿಸುಬ್ಬ
೧.೦
೨೫
ಹಿರಣ್ಯಾಕ್ಷನ ವಧೆ
ಕು೦ಜಾಲು ರಾಮಕೃಷ್ಣಯ್ಯ
೧.೦

2 comments:

  1. Ravi, Nataraj & team,
    Superb Start, Good work, really appreciable. Keep continuing your great work and your dedication.

    ReplyDelete
  2. ನಮ್ಮಂತಹ ಸಾವಿರಾರು ಯಕ್ಷಗಾನ ಅಭಿಮಾನಿಗಳಿಗೆ ಇದು ವರದಾನವೇ ಸರಿ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ ಶ್ರೀ ದೇವಿ ಮಹಾತ್ಮೆ ಪ್ರಸಂಗದ PDF link ನನಗೆ ಎಲ್ಲೂ ಕಾಣಿಸುತ್ತಿಲ್ಲ. ದಯವಿಟ್ಟು ಇದರ ಮಾಹಿತಿ ಕೊಡಿ.

    ReplyDelete

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...